ಕಥೆ
ಭಾರತದ ಸಂವಿಧಾನ ಜನವರಿ ೨೬, ೧೯೫೦ರಂದು ಜಾರಿಗೆ ಬಂತು ಮತ್ತು ರಾಜೇಂದ್ರ ಪ್ರಸಾದ್ ಮೊದಲ ರಾಷ್ಟ್ರಪತಿಯಾಗಿ ಭಾರತ ಗಣರಾಜ್ಯವಾಯಿತು. ಈ ದಿನಾಂಕವನ್ನು ಆರಿಸಿದ್ದೇಕೆಂದರೆ ಕಾಂಗ್ರೆಸ್ ಜನವರಿ ೨೬, ೧೯೩೦ರಂದು ಲಾಹೋರಿನಲ್ಲಿ ಪೂರ್ಣ ಸ್ವರಾಜ್ಯ ಘೋಷಿಸಿತ್ತು.
ಪಥಸಂಚಲನ ದೇಶದ ಸೇನಾ ಮತ್ತು ನಾಗರಿಕ ಪ್ರದರ್ಶನ: ರೆಜಿಮೆಂಟ್ಗಳು ಮತ್ತು ಕ್ಷಿಪಣಿಗಳು, ಗಡಿ ಭದ್ರತಾ ಪಡೆಯ ಒಂಟೆ ತಂಡ, ಸಾಹಸ ಮಾಡುವ ಮೋಟಾರ್ ಸೈಕಲ್ ಸವಾರರು, ರಾಜ್ಯಗಳ ಮತ್ತು ಸಚಿವಾಲಯಗಳ ಸ್ತಬ್ಧಚಿತ್ರಗಳು, ಶಾಲಾ ಮಕ್ಕಳು, ಮತ್ತು ಕೊನೆಗೆ ವಿಮಾನಗಳ ಹಾರಾಟ.
